ಯುಗ ಯಗಾದಿ ಕಳೆದರೂ ಯುಗಾದಿ ಮರಳಿ ಬಂದಿದೆ! - 23 Apr, 2016

ಒಮಾಹಾದ ಕನ್ನಡ ಬಂಧುಗಳೇ,

ಇದೆ ತಿಂಗಳ ೨೩ಕ್ಕೆ ಯುಗಾದಿ ಸಮಾರಂಭ ಹಿಂದೂ ದೇವಸ್ಥಾನದಲ್ಲಿ ನಡೆಯಲಿದೆ. ತಮಗೆಲ್ಲರಿಗೂ ಸ್ವಾಗತ ಸುಸ್ವಾಗತ!

ಈ ಸಲದ  ಸಮಾರಂಭದ ಬಹು ಮುಖ್ಯ ಆಕರ್ಷಣೆ, ಕನ್ನಡ ನಾಡಿನ ಕೋಗಿಲೆ ಅಂತಲೇ ಹೆಸರು ಮಾಡಿರುವ  ಖ್ಯಾತ ಗಾಯಕಿ,  ಶ್ರೀಮತಿ. ಬಿ. ಆರ್. ಛಾಯಾ ಅವರ ಗಾನಸುಧೆ! ಅವ್ಯಾಹತವಾಗಿ ಎರಡು ಗಂಟೆಗಳ ಕಾಲ ಸುಮಧುರ ಹಾಡುಗಳನ್ನು, ಪ್ರತ್ಯಕ್ಷವಾಗಿ ಅವರಿಂದಲೇ ಕೇಳುವ ಭಾಗ್ಯ ನಮ್ಮದು!

ಇದರ ಜೊತೆಗೆ ಸಂಘದ ವಿವಿಧ ಸದಸ್ಯರು ಹಾಗೂ ಮಕ್ಕಳು ನಡೆಸಿಕೊಡುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅದಾದ ನಂತರ ರುಚಿ ರುಚಿಯಾದ ಭೂರಿ ಭೋಜನ! ಸ್ವರ್ಗಕ್ಕೆ ಮೂರೆ ಗೇಣು! ಖಂಡಿತ ಬರುವಿರಿ ತಾನೇ?

We are celebrating Yugadi on 23rd of April at Temple. All are welcome!

The main attaraction of this year's function is the singing performance by the famous Kannada Singer Smt. B. R. Chaya, who is affectionately known as "Nightingale of Karnataka". She will be performing live for 2 hours! There are various other cultural programs performed by other members and kids of Sirigandha Kannada Sangha. This will be followed by a delecious food! Do attend and make it a big success!!

ಕಾರ್ಯಕ್ರಮದ ವಿವರಗಳು ಇಂತಿವೆ.

4:00 pm to 4:30 pmಪೂಜೆ (Worship)
4:30 pm to 6:30pmಬಿ ಆರ್. ಛಾಯಾ ಗಾಯನ (B.R. Chaya Program)
6:30 to 6:45 pmಪಂಚಾಂಗ ಶ್ರವಣ (Panchanga shravana)
6:45 to 7:15pmತಿಂಡಿ ತೀರ್ಥ (Snacks)
7:15 pm to 8:30 pmಸಾಂಸ್ಕೃತಿಕ ಕಾರ್ಯಕ್ರಮಗಳು (Cultural Programs)
8:30 pm to 10:00 pmಊಟ (Dinner)

ಧನ್ಯವಾದಗಳು!
ಸಿರಿಗಂಧ ಕನ್ನಡ ಸಂಘ ನೆಬ್ರಾಸ್ಕ (SKSN)
ಸಿರಿಗಂಧದ ಸಂಘದಲಿ ಆನಂದದ ಹೊಳೆ, ಆನುರಾಗದ ಮಳೆ ಎಂದೆಂದು ಚಿಮ್ಮುತಿರಲಿ.